✧••ಸವಿತಾ ಸತೀಶ್ ಶೆಟ್ಟಿ••✧   (✍♥..ಸವಿತಾ (ಸವಿಸತಿ)‌..♦)
6.5k Followers · 6.5k Following

read more
Joined 2 July 2020


read more
Joined 2 July 2020

ಆಗಮಿಸದ ವರುಣ{ಜಡೆಕವನ}

ಏರುತ್ತಿದೆ ದಿನೇ ಬಿಸಿಲ ತಾಪಮಾನ
ತಾಪಮಾನದಿಂದ ಬೇಸತ್ತಿದೆ ಮನ
ಮನವನ್ನು ಸುಡುವಂತಿದೆ ಪ್ರತಿಕ್ಷಣ
ಕ್ಷಣವೂ ಕೇಳುತ್ತಿದೆ ಪಕ್ಷಿಗಳ ಆಕ್ರಂದನ
ಆಕ್ರಂದನಕ್ಕೆ ಪ್ರಕೃತಿಯು ಸೋತಂತಿದೆ
ಸೋಲಿಗೆ ಕಾರಣ ಆಗಮಿಸದ ವರುಣ
ವರುಣ ಬಂದರೆ ಪ್ರಕೃತಿಗೆ ನವ ಚೇತನ
ಚೇತನದಿಂದ ಸಕಲ ಜೀವಿಗೂ ಜೀವದೊಲುಮೆ
ಜೀವದೊಲುಮೆಯಿಂದ ಭೂತಾಯಿಗೆ ಗರಿಮೆ
ಗರಿಮೆಯಲ್ಲಿ ಬಿಸಿಲ ತಾಪಕ್ಕೆ ನಿರ್ಮುಕ್ತಿ
ನಿರ್ಮುಕ್ತಿಯಿಂದ ನಲಿದಾಡಲಿ ಸಕಲ ಜೀವರಾಶಿ
ಜೀವರಾಶಿಯ ಸೊಬಗಿನಲ್ಲಿ ನಗುತಿರಲಿ ನಮ್ಮ ಪ್ರಕೃತಿ//

-



ಬದುಕಿನ ಕೆಲವೊಂದು ಕಳೆದೋದ ನೆನಪುಗಳು ಹಾಗೆ ಮರೆತೋಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು
ಆದರೆ ಆ ನೆನಪುಗಳು ಪದೇ ಪದೇ ಮನಸ್ಸನ್ನು ಚಿವುಟಿ ಕಣ್ಣನ್ನು ಒದ್ದೆ ಮಾಡುತ್ತಿವೆ ಇದುವೇ ನೆನಪುಗಳ ಕರಾಮತ್ತು ಆದರೆ ನೆನಪುಗಳೇ ಈ ಬದುಕಿಗೆ ಶಾಶ್ವತ ಸಂಪತ್ತು

-



ಮುಳುಗುವ ನೇಸರನಾಗುವ ಕಡಲನ್ನು ಒಂದು ಕ್ಷಣ ಬೆಳಗುವ ಹಣತೆ
ಹಾಗೆ ನಮ್ಮ ಒಳ್ಳೆತನವು ಇರಲಿ ನಿಷ್ಕಲ್ಮಶ ಮನದ ಜೊತೆ

-



ಆ ನೆನಪಾಗಿದೆ ನಗುವ ಹೂವೇ
ನೀ ಎಂದಿಗೂ ನನ್ನೊಲವಿನ ಚೆಲುವೆ
ನಿನಗೆ ಬೇಕಾಗಿಲ್ಲ ಚಿನ್ನದ ಒಡವೆ
ಆದರೆ ನನಗೆ ನಿನ್ನದೇ ಗೊಡವೆ

-



ಆದರೆ ಸಮಯದ ನೆನಪುಗಳ ನೆನೆದಾಗ ಕಣ್ಣಲ್ಲಿ ತುಂಬುವುದು ಕಣ್ಣೀರೆಲ್ಲ
ಜೀವನವು ಒಂದು ಕಷ್ಟ ಸುಖಗಳ ಬೇವು ಬೆಲ್ಲ
ಬಂದ ಸಮಯದೊಂದಿಗೆ ನಡೆದು ಸಾಗುವುದು ನಮ್ಮ ಧರ್ಮವೆಲ್ಲ

-



ನೋಯಿಸದಿರು
ಮನವೇ
ನೊಂದು ಬೆಂದು
ಸುಸ್ತಾಗಿರುವೆ
ತಿರಸ್ಕರಿಸದಿರು
ಮನವೇ
ಅವಮಾನಗಳ
ಸಹಿಸಿ ಬಳಲಿರುವೆ
ಮಾತುಗಳ
ನಿಲ್ಲಿಸದಿರು ಮನವೇ
ಆ ಮಾತುಗಳ
ಕೇಳಲು ಕಾದಿರುವೆ
ಕಣ್ಣಿಂದ ಮರೆಯಾಗದಿರು
ಮನವೇ
ನಿನ್ನೇ ನೋಡಲು
ಸದಾ ಸಂಭ್ರಮಿಸುವೆ

-



ನೆನಪುಗಳ ಸಂತೆಯಲ್ಲಿ ಪಯಣ ಹಿತವಾಗಿದೆ
ಯಾರಿಗೂ ನೋವು ಕೊಡದೆ ಸಾಗಬೇಕಾಗಿದೆ
ಇದೇ ಬದುಕಿಗೆ ಶಾಶ್ವತ ಪರಿಹಾರವಾಗಿದೆ

-



ಸಂಕಷ್ಟಹರ ಚತುರ್ಥಿಯ ಶುಭಾಶಯಗಳು

ಗಣಪ ನಿನ್ನ ಭಜಿಸುವುದು ನಮಗೆ ಬಲು ಇಷ್ಟ
ನಿನ್ನ ನಂಬಿ ನಡೆದರೆ ನಮಗೆ ಅದೃಷ್ಟ
ನಿನ್ನ ಪೂಜೆಯು ದಿನವೂ ಬಹಳ ವಿಶಿಷ್ಟ
ಅಪ್ಪ ಸೇವೆ, ಪಂಚಕಜ್ಜಾಯವೇ ನಿನಗಿಷ್ಟ
ಕಳೆದು ಬಿಡು ನೀ ನಮ್ಮ ಬದುಕಿನ ಸಂಕಷ್ಟ

-



ಹೇಳಿ ತಪ್ಪಾಯ್ತು ಅನಿಸಿತು
ಒಮ್ಮೊಮ್ಮೆ ಮನಸ್ಸಿಗೆ ತಾತ್ಸಾರ
ಮೂಡುವಂತಾಯ್ತು
ಸ್ವಾಭಿಮಾನದ ಬದುಕಿಗೆ
ತುಂಬಾ ನೋವಾಯಿತು
ಈ ಬದುಕು ಬರೀ
ಏರಿಳಿತದ ಅಲೆಯಾಯ್ತು
ಅತಿಯಾದ ಆತ್ಮವಿಶ್ವಾಸಕ್ಕೆ
ಕಣ್ಣೀರೇ ಜೊತೆಯಾಯ್ತು

-



ಮುಸ್ಸಂಜೆಯ ಬಾನಲಿ
ಮೂಡಣ ದಿಕ್ಕಿನಲಿ
ಕಿತ್ತಳೆ ಬಣ್ಣದ ಚಿತ್ತಾರ ಮೂಡಿತಿಂದು
ಏನೋ ಅದ್ಭುತ ಒಂದು ಕ್ಷಣದಲಿ
ಮಾಯವಾಗಿ ವಿಸ್ಮಯ ಮನದಲಿ

-


Fetching ✧••ಸವಿತಾ ಸತೀಶ್ ಶೆಟ್ಟಿ••✧ Quotes