ಸೂರ್ಯ ಚಿತ್ತನ್ 🙏   (ಸೂರ್ಯ ಚಿತ್ತನ್ 🙏🏼)
115 Followers · 11 Following

18 ರಲ್ಲಿ ನನಗೆ ಆಗಬೇಕನ್ಸಿದ್ದು ಹೌದು ಸಾಹಿತಿ.
21 ಆದ್ರು ಏನಾಗಿದ್ದೀನಂತ ಸಿಗ್ತಿಲ್ಲಾ ನನಗೇ ಮಾಹಿತಿ😆
Joined 12 December 2018


18 ರಲ್ಲಿ ನನಗೆ ಆಗಬೇಕನ್ಸಿದ್ದು ಹೌದು ಸಾಹಿತಿ.
21 ಆದ್ರು ಏನಾಗಿದ್ದೀನಂತ ಸಿಗ್ತಿಲ್ಲಾ ನನಗೇ ಮಾಹಿತಿ😆
Joined 12 December 2018

ಜ್ಞಾನ ಧಾರೆ ಎರೆದು, ಜ್ಞಾನದ ದೀವಿಗೆಯ ಹಿಡಿದು
ಅಜ್ಞಾನದ ಅಂಧಕಾರ ಸರಿಸುತ್ತ, ಸರಿ ದಾರಿಗೆ ಬೆಳಕ ಚೆಲ್ಲುವ ನನ್ನೆಲ್ಲಾ ನಲ್ಮೆಯ ಶಿಕ್ಷಕರಿಗೆ,
"ಶಿಕ್ಷಕರ ದಿನಾಚರಣೆಯ ಶುಭಾಶಯಗಳು"

-



ಸ್ವರ ಮಾಂತ್ರಿಕ, ಸಂಗೀತ ದಿಗ್ಗಜ, ಗಾನ ಗಂಧರ್ವ, ಎಸ್. ಪಿ. ಬಾಲಸುಬ್ರಹ್ಮಣ್ಯಂ ರವರಿಗೆ 75 ನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು.

ನೀವು ನಮ್ಮೊಂದಿಗಿಲ್ಲಾ ಎಂಬ ಮಾತು ಸುಳ್ಳು, ತಮ್ಮ ಮಾಧುರ್ಯದಲ್ಲಿ, ಮತ್ತು ಹಾಡಿರುವ ಪ್ರತಿ ಹಾಡಿನಲ್ಲಿ ನೀವು ಎಂದಿಗೂ ಜೀವಂತ.
ಅದೆಷ್ಟೋ ಜನರಿಗೆ ಮಾದರಿಯಾಗಿ, ಇನ್ನೂ ನಮ್ಮೆಲ್ಲರನ್ನು ನಿಮ್ಮ ಹಾಡುಗಳ ಮೂಲಕ ಮನೋರಂಜಿಸುತ್ತಿರುವ ನಿಮಗೆ ಕೋಟಿ ನಮನ

ಶರೀರ ಉಳಿಯದಿದ್ದರೇನು,
ಸ್ವರ ಮಾರ್ದನಿಸುವುದು ಶತಕಗಳವರೆಗೂ.
ನಿಮ್ಮ ಸ್ವರ ಮಾಧುರ್ಯಕ್ಕೆ ಸಾಟಿ ಯಾರಿಹರು,
ನಿಮಗೆ ನೀವೇ ಸಾಟಿ ಎಂದೆಂದಿಗೂ!!

-



ಮತ್ತೆ ಮಳೆಯಾಗಿದೆ, ಇತ್ತ ಒಲವಾಗಿದೆ
ಬಿಡುವಿಲ್ಲದೆ ನಿನ್ನದೇ ಸಂಚಿಕೆ,
ಮುಂದುವರೆದಿದೆ ನನ್ನೊಳಗೆ.

ಮಾತೇ ಮರೆತುಹೋಗಿದೆ, ಈ ಭಾವ ಹೊಸತಾಗಿದೆ
ಕಣ್ಣಲ್ಲೇ ಇದೆ ಸಣ್ಣದೊಂದು ಕೋರಿಕೆ,
ಸಹಕರಿಸಬೇಕಿದೆ ನೀ ಒಲವ ಮೇರೆಗೆ!

ಕಾಯುವಿಕೆಗೆ ಕೊನೆಬೇಕಿದೆ, ಕಾಡುವಿಕೆಗೆ ಕೊನೆಯೆಲ್ಲಿದೆ?
ಸ್ಪಂದಿಸದೆ ಮೌನವಾಗಿರುವೆ ನೀ ಹೀಗೆಕೆ?
ಉಳಿದು ಬಿಡಲೆ ನಿನ್ನ ಗುಂಗಲ್ಲೇ
ನಗುವ ನಟಿಸುತ ಕೊನೆವರೆಗೆ!

ನಿನ್ನೊಲವ ಜಪಿಸುತ ಪ್ರತಿ ಗಳಿಗೆ.
ನೆನಪನೇ ಉರಿಸುತ ಈ ಮಳೆಗೆ!

-



ಆಲೋಚನೆಗಳ ಕಡಲಾಗಿ, ನೆನಪಿನ ಜೋಳಿಗೆಯಾಗಿ, ಕವಿತೆಗಳ ಗೀಚಲು ಮೊದಲ ಹಾಳೆಯಾಗಿದೆ !

-



ಅಂಜಿಕೆ ಯಾಕೆ ನೀನು ನೀನಾಗಿರೋಕೆ
ಮುಖವಾಡ ಇಂದಲ್ಲ ನಾಳೆ ಕಳಚಿ ಬೀಳೋದೆ.
ಟೀಕಿಸುವವರಿರುವರು, ಇದ್ದರೂ ಎಲ್ಲವೂ ನೆಟ್ಟಗೆ.
ಪಡಿಯೋಕೆ ಸಾಧ್ಯವೇ ನೀ ಎಲ್ಲರ ಮೆಚ್ಚುಗೆ??

-



ಅಂತರ ಮೀರಿದರೆ, ನಿರ್ಲಕ್ಷ್ಯ ತೋರಿದರೆ
ಮುಖಗವಸು ಧರಿಸದಿದ್ದರೆ, ಕೈಗಳ ಆಗಾಗ ಶುಚಿಗೊಳಿಸದಿದ್ದರೆ
ವೈರಸ್ ಹೊತ್ತು ಗಡಿಯಿಂದ ನುಸುಳಿ ಬಂದರೆ, ಪರೀಕ್ಷೆಗೆ ಒಳಗಾಗದಿದ್ದರೆ
ಇನ್ನೂ ಇದೆಲ್ಲವ ಅರ್ಥೈಸಿಕೊಳ್ಳದಿದ್ದರೆ, ಅಳವಡಿಸಿಕೊಳ್ಳದಿದ್ದರೆ
ನಂಬಿಕೆಗಳು ಇರದು, +ve ಪ್ರಕರಣಗಳು ನಿಯಂತ್ರಣಕ್ಕೆ ಸಿಗದು!

-



ಹೊಸ ರೀತಿಯ ಅಸ್ಪೃಶ್ಯತೆ ಜೀವಿಸುವುದು
ಕೈ ಕುಲಕಲು ಈಗ ಕೈ ಹಿಂಜರಿಯುವುದು
ತಬ್ಬಿಕೊಳ್ಳಲು ಮೈಗೆ ಮುಜುಗರವೆನಿಸುವುದು
ಮುಖಗವಸು ಇಲ್ಲದೆ ಮುಖದಲ್ಲೇನೊ ಕಡಿಮೆಯೆನಿಸುವುದು
ಸಾಮಾಜಿಕ ಅಂತರವಿಲ್ಲದೆ ಯಾವ ನೇರ ಸಂಭಾಷಣೆ ನಡೆಯದು.
ಕಷ್ಟ ಎಂಬ ಕೂಗು ಎಲ್ಲೆಡೆ ಮಾರ್ದನಿಸುವುದು.
ಮೊದಲಿನಂತೇ ಇರಲು ಸಾಧ್ಯವಾಗದು
ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುವುದು!

-



ನಿರೀಕ್ಷೆಯಿಲ್ಲದೆ ಬದುಕುವುದು.






ನಿರೀಕ್ಷೆಯಿಂದಲೇ ಬದುಕುವುದು.

-



ಜೀವನ ಪಾಠ ಇಲ್ಲಿ ನಾಟಿದ್ದು ಎದೆಗೆ
Class ಅಲ್ಲಿ ಕೇಳಿದ್ದು ಈಗ ತಲೆಯಿಂದ ಹೊರಗೆ
ಗೆಲುವು ಹುಡ್ಕೊಂಡು ಬರ್ತಿದೆ ಮನೆಗೆ
ಬಂಧಿಸಿರೋದು ಕಲೆಲಿ ನಿನಗಾಗಲ್ಲ ಕದಿಯೋಕೆ

-



ಕಣ್ಗಳೇ ಈಗ ಕ್ಯಾಮೆರಾವಾಗಿದೆ
ಸೆರೆ ಹಿಡಿದದೆಲ್ಲವೂ ಸೇರಿವೆ ನೆನಪಿನ ಜೋಳಿಗೆಯ!
ಕಣ್ಣಂಚಲಿ ಕೂತ ಹನಿ ಕಾರಣವ ಹೇಳುವುದೇ?
ವಿವರಿಸಲೇ ಬಿಡಿಸಿಟ್ಟು ನೆನಪಿನ ಜೋಳಿಗೆಯ?

-


Fetching ಸೂರ್ಯ ಚಿತ್ತನ್ 🙏 Quotes