" ಬಡತನ, ಹಣ, ಹಸಿವು, ಸಂಭಂದಗಳು ಹಾಗೂ ಸಂಸಾರದ ಜಂಜಾಟಗಳು ಹೀಗೆ ಜಗತ್ತಿನ ಯಾವ ಕೊರತೆಯನ್ನಾದರೂ ನೀಗಿಸಬಹುದು. ಆದರೆ ಒಬ್ಬ ವ್ಯಕ್ತಿಗೆ ಇರಬೇಕಾದ ಸ್ವ ಜ್ಞಾನ, ತಿಳುವಳಿಕೆ, ವಿವೇಕ ವಿವೇಚನೆ ಇಲ್ಲದ ಕೊರತೆಗಳನ್ನು ನೀಗಿಸುವುದು ಬಹಳ ಕಷ್ಟ. ಇದರಿಂದ ಎಲ್ಲವೂ ಇದ್ದು ಏನೂ ಇಲ್ಲದ ಕೊರತೆ ಕಾಡುವುದು ಸಹಜ...
ನಮ್ಮ ದೇಹ, ನಮ್ಮ ಆರೋಗ್ಯ, ಹಾಗೂ ನಮ್ಮ 'ಬದುಕು' ನೂರು ಕೋಟಿಗಿಂತಲೂ ಹೆಚ್ಚು ಬೆಲೆ ಬಾಳುವಂತಹದ್ದು. ಅದನ್ನು ಚಟ, ಹತಾಶೆ, ಭಯ, ಬೇರೆಯವರು ಮಾಡುವ ಅಪಹಾಸ್ಸ್ಯಾಗಳು ಹಾಗೂ ನಮ್ಮ ಅಪಯಶಸ್ಸುಗಳ ಕಾರಣಗಳನ್ನು ಒಡ್ಡಿ ಹಾಳು ಮಾಡಿಕೊಳ್ಳಬಾರದು....