ಕೆಲವರು ನಮ್ಮ ಜೀವನದಲ್ಲಿ ಟಯರ್ಗೆ ಸಿಕ್ಕಿ ಹಾಕಿಕೊಂಡ ಕಲ್ಲಿನ/ಮುಳ್ಳಿನ ತುಂಡಿನಂತೆ, ಎಷ್ಟು ಬೇಗ ಪರಿಶೀಲಿಸಿ ತೆಗೆಯುತ್ತೇವೆಯೋ ಅಷ್ಟು ಬೇಗ ಟಯರ್(ಜೀವನವನ್ನು) ರಕ್ಷಿಸಿಕೊಳ್ಳಬಹುದು. ಇಲ್ಲವಾದಲ್ಲಿ ಅದು ಇನ್ನಷ್ಟು ಆಳಕ್ಕೆ ಹೊಕ್ಕು ಟಯರನ್ನು ಹಾಳು ಗೆಡವುತ್ತದೆ.
ಸಮಾಜದಲ್ಲಿ ನಮ್ಮ ನಗುವನ್ನು ಮಾತ್ರ ನೋಡಲು ಬಯಸುತ್ತಾರೆ, ಅಳುವನ್ನಲ್ಲ. ಸಂತೋಷ ಏನಿದ್ದರೂ ಹೊರ ಜಗತ್ತಿಗೆ, ನೋವು ಸಂಕಟ ನಮ್ಮ ಒಳಗೆ ಇರಬೇಕು. ನಕ್ಕಾಗ ಜೊತೆಗಿದ್ದವರು, ಅಳುವಾಗ ನಮ್ಮ ಪರಿಸ್ಥಿತಿಯನ್ನು ನೋಡಿ ಬೇಸರದಿಂದ ದೂರ ಹೋಗ್ತಾರೆ. ಆದಷ್ಟು ಸಂತೋಷದಿಂದ ಇರಬೇಕು ಅಷ್ಟೇ
ನಮಗೆ ಉತ್ತಮ ಅರೋಗ್ಯವನ್ನು, ಯಾವುದೇ ಊನವಿಲ್ಲದ ಅಂಗಾಗವನ್ನು, 3 ಹೊತ್ತು ಊಟಕ್ಕೆ ದಾರಿ ಮಾಡಿಕೊಳ್ಳಲು ಬುದ್ಧಿಯನ್ನು, ಕೊಟ್ಟಿರುವ ದೇವರಿಗೆ ಒಮ್ಮೆಯಾದರು ಧನ್ಯವಾದ ಹೇಳದೆ ಹೋದರೆ ಹೇಗೆ.
ಬಿದ್ದಾಗ ಕೈ ಹಿಡಿದು ಎತ್ತಲು ನಿನ್ನ ಪಕ್ಕ ಯಾರಾದರೂ ಇದ್ದೇ ಇರುತ್ತಾರೆ ಎಂಬ ಮೂಢನಂಬಿಕೆಯಿಂದ ಜೀವನ ನಡೆಸುವ ಬದಲು, ಯಾರಿಲ್ಲದಿದ್ದರೂ ಸ್ವಸಹಾಯದಿಂದ ನಾನು ಮೇಲೆದ್ದು, ಮುನ್ನಡೆದು ನನ್ನ ಗುರಿ ತಲುಪುವೆ ಎಂಬ ನಿರ್ಣಯಕ್ಕೆ ಬರಬೇಕು.