ಪಿತೃಭಿಃ ತಾಡಿತಃ ಪುತ್ರಃ
ಶಿಷ್ಯಸ್ತು ಗುರುಶಿಕ್ಷಿತಃl
ಘನಾಹತಂ ಸುವರ್ಣಂ ಚ
ಜಾಯತೇ ಜನಮಂಡನಮ್ll
ತಂದೆಯಿಂದ ಹೊಡೆಸಿಕೊಂಡ ಮಗ ..!!
ಗುರುವಿನಿಂದ ಶಿಕ್ಷೆಗೊಳಗಾದ ಶಿಷ್ಯ..!!
ಸುತ್ತಿಗೆಯ ಏಟು ತಿಂದ ಕಬ್ಬಿಣ..!!
ಲೋಕದಲ್ಲಿ ಬೆಳಗುವುದು ನಿಶ್ಚಿತ..!!
ಎಂಬ ಜ್ಞಾನದ ನುಡಿಗಳಾಡುತ್ತಾ ನನ್ನ ಅಭಿಪ್ರಾಯವನ್ನು ಪ್ರಸ್ತುತಪಡಿಸಲು ಇಚ್ಚಿಸುವೆ....
ಎಲ್ಲ ಶಿಕ್ಷಕರ ಅಡಿದಾವರೆಗಳಿಗೆ ನಮಿಸುತ್ತಾ ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತೇನೆ. ವ್ಯಕ್ತಿತ್ವಕ್ಕೆ ಧರ್ಪಣ ಹಿಡಿದು ,ವ್ಯಕ್ತಿತ್ವ ನಿರ್ಮಾಣಕ್ಕೆ ಜೀವನ ಸಂದೇಶ ನೀಡಿ, ಬಂಗಾರದ ಬದುಕಿಗೆ ದಾರಿದೀಪವಾಗಿ ,ತೆರೆದ ಬಾಗಿಲಿಗೆ ಜ್ಞಾನವಾಗಿ ,ಜ್ಞಾನ ಸುಧೆಯಾಗಿ ಸಲುಹಿ, ಸುಜ್ಞಾನದ ಬಂಧುವಾಗಿ, ಜ್ಞಾನದ ಆಗರವಾಗಲು ಸಲುಹಿದ ಶಿಕ್ಷಕ ವೃಂದದವರಿಗೆ ಅಭಾರಿಯಾಗಿರುತ್ತೇನೆ.
ದಾನ ದಾನಗಳಲ್ಲಿ ಶ್ರೇಷ್ಠ ದಾನವಾದ ಜ್ಞಾನವೆಂಬ ಬೀಜವ ಬಿತ್ತಿ ವಿದ್ಯಾರ್ಥಿಗಳ ಬಾಳ ಬೆಳಗಿಸಲು ದಾರಿದೀಪವಾದ ನನ್ನ ಶಿಕ್ಷಣದ ಪಾಲುದಾರರಾಗಿ ಕಾರ್ಯನಿರ್ವಹಿಸಿದ ಎಲ್ಲಾ ಶಿಕ್ಷಕ ವೃಂದದವರಿಗೂ ಪ್ರೀತಿಪೂರ್ವಕ ನಮನಗಳನ್ನು ಸಲ್ಲಿಸಲು ಬಯಸುವೆ.
ವಿದ್ಯಾರ್ಥಿಯ ಬಾಳಲ್ಲಿ ಅಜ್ಞಾನವ ಹೊಗಲಾಡಿಸಿ, ಆತ್ಮವಿಶ್ವಾಸ ಕಳೆದುಕೊಳ್ಳುವ ಸಮಯದಲ್ಲಿ ಜ್ಞಾನದ ದೀವಿಗೆಯನ್ನು ಹೊತ್ತಿಸಿ,ನಂಬಿಕೆ,ಆತ್ಮವಿಶ್ವಾಸದ ಅಡಿಪಾಯವನ್ನು ಹೂಡಿ ಜ್ಞಾನ ಸರಸ್ವತಿಯ ಮಡಿಲೇರಿಸಿ, ಉತ್ತಮ ಪ್ರಜೆಗಳನ್ನಾಗಿ ಮಾಡಿ ಬೆಂಬಲಿಸಿರುವಿರಿ.
ವಿದ್ಯಾರ್ಥಿಯೆಂಬ ಹಣತೆಗೆ ಎಣ್ಣೆ ಎಂಬ ಜ್ಞಾನವ ಎರೆದು ಪ್ರಕಾಶಮಾನವಾದ ಬೆಳಕು ಎಲ್ಲಡೆ ಪಸರಿಸುವ ಎಲ್ಲ ಶಿಕ್ಷಕರಿಗೂ ಮಗದೊಮ್ಮೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
💐😊💐
✍️ಅರ್ಪಿತಾ.
-