ಕಣ್ಣೀರು ಬರುವುದಕೆ ಕಾರಣ ಅವಮಾನ
ಸಂಬಂಧ ಕೆಡಲು ಕಾರಣವು ಅನುಮಾನ
ಪರಿಸ್ಥಿತಿ ಬದಲಿಸಲು ಮುಖ್ಯ ಸುದೃಢ ಮನ
ನಾನು ಬದಲಾಗಲು ಬೇಕಿದೆ ಸ್ವಾಭಿಮಾನ-
ನನ್ನ ರಚನೆಯ ಕವನಗಳು ಈಗ ಯೂಟ್ಯೂಬಿನಲ್ಲಿ ಕೇಳಲು ಸಿದ್ಧವಾಗಿದೆ... read more
ರಾಖಿಯ ಈ ದಾರವು ನಮ್ಮ ನಡುವಿನ
ಪ್ರೀತಿ, ವಿಶ್ವಾಸ ಮತ್ತು ಸಹೋದರತ್ವದ ಸಂಕೇತ
ನಗುವಿಗೂ ಅಳುವಿಗೂ ಸಾಕ್ಷಿಯಾಗಿರುವ
ಮಧುರವಾದ ನಮ್ಮಿಬ್ಬರ ಅನುಬಂಧ ಶಾಶ್ವತ-
ನಿನ್ನ ನಗುವೇ ನನ್ನ ಬದುಕಿಗೆ ಬಲ
ಬೆಲೆಕಟ್ಟಲಾಗದ ನಿಧಿ ನೀ ಅಮೂಲ್ಯ
ದೇಹ ದೂರವಿದ್ದರೂ ಬಂಧ ಪ್ರಬಲ
ಅಕ್ಕ/ತಂಗಿಗೆ ಈ ಸುದಿನದ ಶುಭಾಶಯ-
ಕಣ್ಣಿಗೂ ಕಣ್ಣೀರಿಗೂ ಕದನ
ಮನಸಿಗೂ ಕನಸಿಗೂ ದುಮ್ಮಾನ
ವದನಕೂ ವಚನಕೂ ಗೊಂದಲ
ವ್ಯಕ್ತಿಯು ವ್ಯಕ್ತಿತ್ವವು ನಿರ್ಬಲ-
ಸ್ತ್ರೀಯರ ಶ್ರದ್ಧೆ ಸಾಂಸ್ಕೃತಿಕ ಮೌಲ್ಯ ಹಾಗೂ ಕುಟುಂಬದ ಒಗ್ಗಟ್ಟಿನ ಪ್ರತಿಬಿಂಬ
ಐಶ್ವರ್ಯ, ಆರೋಗ್ಯ, ಸಂತಾನ, ಧರ್ಮ, ಧೈರ್ಯ, ಧಾನ್ಯ, ಜಯ ಮತ್ತು ವಿದ್ಯೆ ಎಂಬ ಅಷ್ಟ ಲಕ್ಷ್ಮೀಯರ ಕೃಪೆ-
ಆತ್ಮವಿಶ್ವಾಸದ ಪೆನ್ನಿಗೆ ಸಕಾರಾತ್ಮಕ ಚಿಂತನೆಯ ಇಂಕನ್ನು ತುಂಬಿದಾಗ ನಿನ್ನೊಳಗಿನ ಕಲಾಕಾರನಿಂದ ಸುಂದರ ಬದುಕು ರೂಪುಗೊಳ್ಳುತ್ತದೆ.
-
ಅಹಂಕಾರ ಖಾರವಾಗಿ
ಅಂತಸ್ತು ಅಸ್ತವಾಗಿ
ನಿರೀಕ್ಷೆ ನಿರ್ನಾಮವಾಗಿ
ಮಮಕಾರ ಮಧುರವಾಗಿ
ಬಂಧನ ಭವ್ಯವಾಗಿ
ಹಗೆತನ ಹರಿದುಹೋಗಿ
ಅನುಪಮ ಅನುಬಂಧದ
ಗೆಳೆತನ ಶಾಶ್ವತವಾಗಿರಲಿ-
ಶ್ರದ್ಧೆ, ಶ್ರಮ, ನಂಬಿಕೆ, ಪ್ರಯತ್ನವೆಂಬ ಹೆಜ್ಜೆಗಳಿಂದ ಬೆಳವಣಿಗೆಯ ಹಾದಿಯಲ್ಲಿ ನಡೆದಾಗ ಯಶಸ್ಸಿನ ನಿಲ್ದಾಣ ಸಿಗುವುದು.
-
ನಂಬಿಕೆ ಮತ್ತು ಆತ್ಮವಿಶ್ವಾಸವೆಂಬ ಗಾಲಿಗಳಿಂದ ಧೈರ್ಯವೆಂಬ ಸಾರಥಿ ಮುನ್ನಡೆಸುವ ಜೀವನವೆಂಬ ರಥ ಯಶಸ್ಸಿನತ್ತ ತಲುಪುವುದು.
-