ಸ್ವಾತಂತ್ರ್ಯ ಯೋಧರ ಕುಟುಂಬದಲ್ಲಿ ಜನಿಸಿ
ದೇಶಭಕ್ತಿಯನು ಉಸಿರಾಗಿಸಿಕೊಂಡು
ಬಡತನದ ಬವಣೆಯಲಿ ಬೆಂದು,
ಜೀವದಗುಳಿಗಾಗಿ ದುಡಿದರೂ,
ಹೃದಯ ಸಿರಿವಂತಿಕೆಯ ಸಾಗರವಾಗಿಹರು.
ನಡೆನುಡಿಯಲಿ ಗುರು ಭಕ್ತಿ ಹೊಂದಿ
ಸಂಸ್ಕೃತಿ ಸಂಸ್ಕಾರಗಳ ಪಾಲಿಸಿದರು.
ಭಾರತೀಯರ ಬಿಡುಗಡೆಯ ಬಯಸಿ
ಬಾಲ್ಯವನು ಬಂಧನದಲಿ ಕಳೆದಿಹರು.
ಕಾಂತಿ ನಯನಗಳಲಿ ಕ್ರೋಧವನುರಿಸಿ,
ಬ್ರಿಟಿಷರ ಪಾಲಿಗೆ ಬೆಂಕಿಯಾದರು.
ವಿದೇಶಗಳಲಿ ದೇಶದ ಕಂಪನು ಸಾರಿ
ಗುರು ವಾಣಿಯನು ಸತ್ಯವಾಗಿಸಿಹರು.
ಗಾಂಧಿ ಗ್ರಾಮೀಣ ಗುರುಕುಲ ನಿರ್ಮಾತೃರಾಗಿ,
ಗ್ರಾಮೀಣ ಪ್ರತಿಭೆಗಳಿಗೆ ದಾರಿದೀಪವಾದರು.
ಪ್ರೌಢ-ಪದವಿಪೂರ್ವ ಕಾಲೇಜು ಕಟ್ಟಿಸಿ,
ಬಡ ಮಕ್ಕಳ ಶಿಕ್ಷಣಕೆ ಗುರುಮಾತೆಯಾದರು.
ಸಮಾಜ ಸೇವೆಯಲಿ ತೊಡಗಿಕೊಂಡು
ಹೊಸರಿತ್ತಿಯ "ಮದರ್ ತೆರೇಸಾ"ರಾಗಿ
ಹಲವಾರು ಗೌರವ, ಪ್ರಶಸ್ತಿ,
ಸಮ್ಮಾನಗಳಿಗೆ ಭಾಜನರಾದರು.
ಅವರೇ ನಮ್ಮ ಏಲಕ್ಕಿ ಕಂಪಿನ ನಾಡೆಂದೇ
ಹೆಸರುವಾಸಿಯಾದ ಹಾವೇರಿ ಜಿಲ್ಲೆಯ ಹೊಸರಿತ್ತಿ
ಗ್ರಾಮದ ಎಲ್ಲರ ಮನೆ ಮಗಳೆಂದೇ ಪ್ರಸಿದ್ಧಿಯಾದ
ವೀರ ಮಹಿಳೆ, ಸ್ವಾತಂತ್ರ್ಯ ಹೋರಾಟಗಾರ್ತಿ ........
ಚೆನ್ನಮ್ಮ ಹಳ್ಳಿಕೇರಿಯವರು...🙏🙏🙏🙏
-✍️ವಿಜಯಲಕ್ಷ್ಮಿ ಕುಲಕರ್ಣಿ
-